ಮೌಲ್ವಿ ಮನೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ದ್ವಿಚಕ್ರವಾಹನದಲ್ಲಿ ಬಂದ ಯುವಕರ ತಂಡ ಜೈ ಶ್ರೀರಾಮ್ ಮಂತ್ರ ಪಠಿಸುವಂತೆ ಒತ್ತಾಯಿಸಿದ್ದಾರೆ. ಹೇಳಲು ನಿರಾಕರಿಸಿದ್ದಕ್ಕೆ ತಮ್ಮನ್ನು ಅಮಾನುಷವಾಗಿ ಥಳಿಸಿ ಟೋಪಿ ಕಿತ್ತೆಸೆದ ಗಡ್ಡ ಹಿಡಿದು ಎಳೆದಿದ್ದಾರೆ ಎಂದು ಮೌಲ್ವಿ ಇಮ್ಲೌರ್ ರೆಹಮಾನ್ ಹೇಳಿದ್ದಾರೆ. ಈ ಘಟನೆ ನಡೆಯುತ್ತಿದ್ದರೂ ಜನತೆ ಮೂಕಪ್ರೇಕ್ಷಕರಾಗಿದ್ದರೇ ಹೊರತು ರಕ್ಷಣೆಗೆ ಯಾರೂ ಧಾವಿಸಲಿಲ್ಲ ಎಂದು ಮೌಲ್ವಿ ಹೇಳಿದ್ದಾರೆ.