ಪರಿಣಾಮ ಸುಮಾರು 54 ಲಕ್ಷಕ್ಕೂ ಅಧಿಕ ಮಂದಿ ಪ್ರವಾಹ ಪೀಡಿತರಾಗಿದ್ದು, ಅವರಿಗೆ ನೆರವಾಗುವಂತೆ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ. ಈ ಕುರಿತಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಕೇವಲ ಅಸ್ಸಾಂ ಪ್ರವಾಹ ಸಂತ್ರಸ್ಥರ ಕುರಿತು ಟ್ವೀಟ್ ಮಾಡಿದರೆ ಸಾಲದು.. ಅವರಿಗೆ ಅಗತ್ಯ ನೆರವು ನೀಡುವ ಮೂಲಕ ಅವರ ಕಷ್ಟದಲ್ಲಿ ಭಾಗಿಯಾಗೋಣ ಎಂದು ಕರೆ ನೀಡಿದ್ದಾರೆ. ಅಂತೆಯೇ ಬಾಲಿವುಡ್ ನಟರಾದ ಶ್ರದ್ಧಾಕಪೂರ್, ವಿವೇಕ್ ಒಬೆರಾಯ್, ಖ್ಯಾತ ಸ್ಪ್ರಿಂಟರ್ ಹಿಮಾದಾಸ್, ಪ್ರಿಯಾಂಕಾ ಚೋಪ್ರಾ ಕೂಡ ಅಸ್ಸಾಂ ಪ್ರವಾಹ ಸಂತ್ರಸ್ಥರಿಗೆ ನೆರವಾಗುವಂತೆ ಕರೆ ನೀಡಿದ್ದಾರೆ.