ಮಧ್ಯಪ್ರದೇಶದಲ್ಲಿ ಬಿಎಸ್ ಪಿ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದು ಬಿಎಸ್ ಪಿ ಶಾಸಕಿಯ ಪತ್ನಿ ಕೊಲೆ ಆರೋಪಿಯಾಗಿದ್ದಾನೆ. ಕಳೆದ 4 ತಿಂಗಳಿನಿಂದ ಕೊಲೆ ಆರೋಪಿ ಗೋವಿಂದ್ ಸಿಂಗ್ ಠಾಕೂರ್ ಬಂಧನಕ್ಕೆ ವಾರೆಂಟ್ ಜಾರಿ ಮಾಡಲಾಗಿದೆ. ಬಂಧಿಸಿದ ಅಧಿಕಾರಿಗೆ 25,000 ರೂಪಾಯಿ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು. ಬಹುಮಾನ ಘೋಷಣೆ ಮಾಡಿರುವುದು ಪಕ್ಷದ ಒಳಗೆ ತೀವ್ರ ವಿರೋಧಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಆ ಮೊತ್ತವನ್ನು ವಾಪಸ್ ಪಡೆದಿತ್ತು.