ಮತ್ತೊಮ್ಮೆ, ಇಂತಹ ತಪ್ಪು ಆಗಬಾರದು ಎಂದು ಎಚ್ಚರಿಕೆ ನೀಡಿದರು. ಬುಧವಾರ ರಾಜ್ಯಸಭೆಯ ಕಾರ್ಯಸೂಚಿಯಲ್ಲಿ ಸಚಿವ ಬಲಿಯಾನ್ ಅವರ ಹೆಸರಿದ್ದರೂ ಅಂದು ಅವರು ಸದನಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಭಾಪತಿ ವೆಂಕಯ್ಯ ನಾಯ್ಡು ಅವರು ಸಚಿವರನ್ನು ಉದ್ದೇಶಿಸಿ, ಸಚಿವರೇ ಬುಧವಾರದ ಕಾರ್ಯಸೂಚಿಯಲ್ಲಿ ನಿಮ್ಮ ಹೆಸರಿತ್ತು, ಆದರೆ ನೀವು ಹಾಜರಿರಲಿಲ್ಲ, ಇನ್ನೂ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು. ಸಚಿವ ಬಲಿಯಾನ್ ತಮ್ಮ ಗೈರುಹಾಜರಿಗೆ ವಿಷಾದ ವ್ಯಕ್ತಪಡಿಸಿ, ಇನ್ನೂಮುಂದೆ ಈ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದರು.