ವಾಮಾಚಾರದ ಶಂಕೆ: 4 ಜನರನ್ನು ಹೊಡೆದು ಹತ್ಯೆ

ವಾಮಾಚಾರ ಮಾಡುತ್ತಿದ್ದ ಶಂಕೆಯ ಹಿನ್ನೆಲೆಯಲ್ಲಿ ನಾಲ್ವರು ಹಿರಿಯ ನಾಗರಿಕರು ಹಾಗೂ ಇಬ್ಬರು ಮಹಿಳೆಯರಿಗೆ ಹಿಗ್ಗಾ-ಮುಗ್ಗಾ ಥಳಿಸಿ ಸಾಯಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ವಾಮಾಚಾರದ ಶಂಕೆ: 4 ಜನರನ್ನು ಹೊಡೆದು ಹತ್ಯೆ
ವಾಮಾಚಾರದ ಶಂಕೆ: 4 ಜನರನ್ನು ಹೊಡೆದು ಹತ್ಯೆ
ವಾಮಾಚಾರ ಮಾಡುತ್ತಿದ್ದ ಶಂಕೆಯ ಹಿನ್ನೆಲೆಯಲ್ಲಿ ನಾಲ್ವರು ಹಿರಿಯ ನಾಗರಿಕರು ಹಾಗೂ ಇಬ್ಬರು ಮಹಿಳೆಯರಿಗೆ ಹಿಗ್ಗಾ-ಮುಗ್ಗಾ ಥಳಿಸಿ ಸಾಯಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. 
ಗುಮ್ಲಾ ಜಿಲ್ಲೆಯ ನಾಗರ್ ಸಿಸ್ಕರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಮಾಹಿತಿಯ ಪ್ರಕಾರ 10 ಜನ ಮುಸುಕುಧಾರಿಗಳು ಸಂತ್ರಸ್ತರನ್ನು ಅವರ ಮನೆಯಿಂದ ಹೊರಗೆಳೆದು ಹೊಡೆದು ಹತ್ಯೆ ಮಾಡಿದ್ದಾರೆ. 
ಮೇಲ್ನೋಟಕ್ಕೆ ವಾಮಾಚಾರದ ಶಂಕೆಯಿಂದ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ತನಿಖೆಯಾಗಬೇಕಿದ್ದು, ಅಪರಾಧಿಗಳಿಗಾಗಿ ಶೋಧಕಾರ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com