ರಾಜೀನಾಮೆ ನೀಡ್ತೇನೆ ಹೊರತು ಸದನ ಮುಂದೂಡಲ್ಲ:ಆಡಿದ ಮಾತಿಗೆ ನಾನು ಬದ್ಧ: ಸ್ಪೀಕರ್ ರಮೇಶ್ ಕುಮಾರ್

ರಾತ್ರಿ 9 ಗಂಟೆಗೂ ಮುನ್ನ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಯಲೇಬೇಕು, ಸದನ ಮುಂದೂಡಲು ಸಾಧ್ಯವಿಲ್ಲ. ನಾನು ಸದನದ್ಲಲಿ ಆಡಿದ ಮಾತಿಗೆ ಬದ್ಧ, ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸ್ಪೀಕರ್
ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ರಾತ್ರಿ 9 ಗಂಟೆಗೂ ಮುನ್ನ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಯಲೇಬೇಕು, ಸದನ ಮುಂದೂಡಲು ಸಾಧ್ಯವಿಲ್ಲ. ನಾನು ಸದನದ್ಲಲಿ ಆಡಿದ ಮಾತಿಗೆ ಬದ್ಧ, ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸದನದಲ್ಲಿ ವಿಶ್ವಾಸಮತ ಯಾಚಿಸುವುದಕ್ಕೆ ಸಿಎಂ ಕುಮಾರಸ್ವಾಮಿಗೆ ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ಗಡುವು ಹತ್ತಿರವಾಗುತ್ತಿದೆ. ಆದರೂ ಸಹ ಸದನ ಪುನಾರಂಭಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ ರೇವಣ್ಣ, ಸಿದ್ದರಾಮಯ್ಯ ಆದಿಯಾಗಿ ಮೈತ್ರಿ ಪಕ್ಷದ ನಾಯಕರು ಸದನ ಮುಂದೂಡುವಂತೆ ಮನವಿ ಮಾಡಿಕೊಂಡರು. ಆದರೆ ಯಾರ ಮಾತಿಗೂ ಜಗ್ಗದ ಸ್ಪೀಕರ್ ರಮೇಶ್ ಕುಮಾರ್ ನಾನೇ ರಾಜೀನಾಮೆ ನೀಡುತ್ತೇನೆ ಆದರೆ ಸದನ ಮುಂದೂಡುವುದಿಲ್ಲ. ವಿಶ್ವಾಸಮತಯಾಚನೆ ಪ್ರಕ್ರಿಯೆ ಇಂದೇ ಮುಗಿಸಬೇಕು ಎಂದು ಹೇಳಿದ್ದ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com