ಕೆ.ಚಂದ್ರಶೇಖರ್ ರಾವ್ ಅವರ ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 200 ಕೋಟಿಯಷ್ಟು ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕೇವಲ ಮುಖ್ಯಮಂತ್ರಿ ಸ್ವಗ್ರಾಮದ ಜನರಿಗೆ ಅನುಕೂಲ ಮಾಡಿಕೊಟ್ಟರೆ ಸಾಕೇ?, ಈ ಯೋಜನೆ ಪ್ರಾಂತ್ಯದ ಎಲ್ಲ ಜನರಿಗೆ ಸಿಗುವಂತಾಗಬೇಕು. ರಾಜ್ಯದ ಎಲ್ಲ ಜನರಿಗೂ ಅನುಕೂಲವಾಗುವಂತೆ ಯೋಜನೆಗಳನ್ನು ಘೋಷಿಸಬೇಕು ಎಂದು ಬಿಜೆಪಿ ಮುಖಂಡ ಪಿ ಮುರಳೀಧರ್ ರಾವ್ ಆಗ್ರಹಿಸಿದ್ದಾರೆ.