ಈ ಕುರಿತು ಸರಣಿ ಟ್ವೀಟ್ ಮಾಡಿರುವ ದೆಹಲಿ ಡಿಸಿಎಂ, 'ಸೂಪರ್ 30 ಸಂಸ್ಥೆಯ ಆನಂದ್ ಕುಮಾರ್ ಅವರು ತಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರ ಕೆಲಸ ಹಾಗೂ ವ್ಯಕ್ತಿತ್ವ ದೇಶದ ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದೆ. ಬಡ ಮಕ್ಕಳೂ ಐಐಟಿ-ಜೆಎಎ ಕನಸನ್ನು ಸಾಧಿಸಲು ಇವರು ಪ್ರೇರಣೆಯಾಗಿದ್ದಾರೆ. ಅವರು ನಿಜವಾದ ಅರ್ಥದಲ್ಲಿ 'ಗುರು' ' ಎಂದಿದ್ದಾರೆ.