ಮಂಜಿನ ಶಿಖರಗಳು ಹಾಗೂ ಕಠಿಣ ಪರಿಸ್ಥಿತಿಯ ನಡುವೆಯೂ ಯೋಧರು ತಮ್ಮ ಛಲವನ್ನು ಬಿಡಲಿಲ್ಲ. ಅವರಿಗೆ ಭಾರತೀಯ ಸೇನೆಯ ಘನತೆಯನ್ನು ಎತ್ತಿಹಿಡಿಯುವ ಧ್ಯೇಯವಿತ್ತು ಎಂದರು. ನಂತರ ಅವರು, ಯುದ್ಧದಲ್ಲಿ ಹುತಾತ್ಮರಾದವರು, ಗಾಯಗೊಂಡವರು ಹಾಗೂ ಸೇನೆಯಲ್ಲಿ ಹೋರಾಡಿದ, ಬೆಂಬಲಿಸಿದ ಪ್ರತಿಯೊಬ್ಬರಿಗೆ ಗೌರವ ಸೂಚಿಸಿದರು. ಸೇನೆಯನ್ನು ಆಧುನೀಕರಿಸುವ ಕುರಿತು ಮಾತನಾಡಿದ ಅವರು, ತಾವು ಶಸ್ತ್ರಾಸ್ತ್ರಗಳ ಆಧುನೀಕರಣಕ್ಕೆ ಯೋಜಿಸಿದ್ದು, ಫಿರಂಗಿಗಳ ಮೇಲೆ ಹೆಚ್ಚಿನ ಗಮನ ಹರಿಸಿದ್ದೇವೆ. 2020ರ ವೇಳೆಗೆ ಹೋವಿಟ್ಜರ್ಸ್ ಅನ್ನು ಪಡೆಯಲಿದ್ದೇವೆ. ತಾವು ದಕ್ಷಿಣ ಕೊರಿಯಾದ ಸಹಯೋಗದೊಂದಿಗೆ ಕೆ-9 ವಜ್ರವನ್ನು ತಯಾರಿಸುತ್ತಿದ್ದೇವೆ. ದೇಶಿಯವಾಗಿ ಬಂದೂಕಿನಂತಹ ಎರಡು ಅಸ್ತ್ರಗಳನ್ನು ತಯಾರಿಸಲಾಗುತ್ತಿದೆ ಎಂದರು.