ಧಾರಾಕಾರ ಮಳೆಯಿಂದಾಗಿ ಜಮ್ಮು ನಗರಿಂದ ಕಾಶ್ಮೀರದ ಬಾಲ್ಟಾಲ್ ಮಾರ್ಗದಲ್ಲಿ ಅಮರನಾಥ ಯಾತ್ರೆಯನ್ನು ಶುಕ್ರವಾರ ರದ್ದುಗೊಳಿಸಲಾಗಿತ್ತು. ಆದಾಗ್ಯೂ, ಮಳೆಯ ನಡುವೆಯೂ 17 ಮಕ್ಕಳು, 785 ಮಹಿಳೆಯರು ಹಾಗೂ 240 ಸಾಧುಗಳನ್ನೊಳಗೊಂಡ 25 ನೇ ತಂಡ ಬಾಗ್ ವಾಟಿ ನಗರದ ಬೇಸ್ ಕ್ಯಾಂಪ್ ನಿಂದ 165 ವಾಹನಗಳಲ್ಲಿ ಬಿಗಿ ಬಂಧೋಬಸ್ತ್ ನಲ್ಲಿ ಅಮರಯಾತ್ರೆ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.