ಇನ್ನು ಚಂಡಿಗಢದ ಉಪ ಆಯುಕ್ತ, ಅಬಕಾರಿ ತೆರಿಗೆ ಆಯುಕ್ತ ಮಂದೀಪ್ ಸಿಂಗ್ ಬರಾರ್ ಈ ವಿಷಯ ಕುರಿತಂತೆ ಮಾತನಾಡಿದ್ದು, 'ರಾಹುಲ್ ಬೋಸ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಹಾಗೂ ಬಿಲ್ ಆಧಾರದ ಮೇಲೆ ಆ ಪಂಚತಾರಾ ಹೋಟೆಲ್ ಮೇಲೆ ತನಿಖೆಗೆ ಆದೇಶಿಸಿದ್ದೇನೆ' ಎಂದಿದ್ದರು. ಅಷ್ಟೆಅಲ್ಲ ಹೋಟೆಲ್ ತಾಜಾ ಹಣ್ಣಿನ ಮೇಲೆ ಜಿಎಸ್ಟಿ ಹೇಗೆ ಹಾಕಿದ್ದಾರೆ ಎಂದು ತನಿಖೆ ನಡೆಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಒಂದು ವೇಳೆ ಇದರಲ್ಲಿ ಹೋಟೆಲ್ನ ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದೂ ಹೇಳಿದ್ದರು.