ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಜೊತೆ ಮಾತನಾಡಿದ ನಂತರ ಆರ್ ಟಿಐ ಕಾಯ್ದೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಮನವರಿಕೆ ಆಗಿದೆ ಎಂದು ಟಿಆರ್ ಎಸ್ ನಾಯಕ ಕೇಶವ ರಾವ್ ಹೇಳಿದ್ದಾರೆ. ಟಿಆರ್ ಎಸ್ ನಾಯಕರು ಮಸೂದೆಗೆ ಬೆಂಬಲಿಸಿರುವ ನಡೆಯನ್ನು ಬಿಜೆಪಿಯೊಂದಿಗೆ ಟಿಆರ್ ಎಸ್ ಕೈ ಜೋಡಿಸಲು ಮುಂದಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.