ಖ್ಯಾತ ಉದ್ಯಮಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್, ಸೋಮವಾರ ರಾತ್ರಿ ಮಂಗಳೂರು ಸಮೀಪದ ನೇತ್ರಾವತಿ ಸೇತುವೆ ಮೇಲೆ ನಿಗೂಢವಾಗಿ ಕಾಣಿಯಾಗಿದ್ದರು. ಪೊಲೀಸರು, ನುರಿತ ಈಜುಗಾರರ ತಂಡ, ಮೀನುಗಾರರು ಸೇರಿದಂತೆ ಹಲವು ವಿಶೇಷ ತಂಡಗಳಿಂದ ಶೋಧ ಕಾರ್ಯ ನಡೆಸಲಾಗಿತ್ತು. ಸತತ 36 ಗಂಟೆಗಳ ಕಾಲ ನಡೆದ ಶೋಧದ ಬಳಿಕ ಬುಧವಾರ ಬೆಳಗ್ಗೆ 60:30ರಲ್ಲಿ ಹೊಯ್ಗೆ ವಜಾರ್ ಅಳಿವೆ ಬಳಿಯ ಹಿನ್ನೀರಿನಲ್ಲಿ ಸಿದ್ದಾರ್ಥ್ ಅವರ ಮೃತ ದೇಹ ಪತ್ತೆಯಾಗಿದೆ.