ಭಾನುವಾರ ನಡೆದ ಕಾರು ಅಪಘಾತದಲ್ಲಿ ಸಂತ್ರಸ್ತೆ ಮಾವ ಮಹೇಶ್ ಸಿಂಗ್ ಅವರ ಪತ್ನಿ ಪುಷ್ಪಾ ಮೃತಪಟ್ಟಿದ್ದು, ಪತ್ನಿಯ ಅಂತಿಮ ದರ್ಶನಕ್ಕಾಗಿ ರಾಯ್ ಬರೇಲಿ ಜೈಲಿನಿಂದ ಗಂಗಾ ಘಾಟ್ ಗೆ ಅವರನ್ನು ಕರೆತರಲಾಗಿತ್ತು. ಈ ವೇಳೆ ಮಾಧ್ಯಮದ ಜತೆ ಮಾತನಾಡಲು ಮಹೇಶ್ ಸಿಂಗ್ ಗೆ ಪೊಲೀಸರು ಅವಕಾಶ ನೀಡಲಿಲ್ಲ. ಆದರೂ ಪೊಲೀಸರು ವಾಪಸ್ ಕರೆದೊಯ್ಯುತ್ತಿದ್ದ ವೇಳೆ, ನನ್ನ ಇಡೀ ಕುಟುಂಬ ಮುಗಿಸಲು ಸಂಚು ರೂಪಿಸಲಾಗಿದೆ. ನನ್ನ ವಿರುದ್ಧ ನಕಲಿ ಕೇಸ್ ದಾಖಲಿಸಲಾಗಿದೆ ಎಂದು ಕೂಗಿ ಹೇಳಿದರು.