ಗುಜರಾತ್ : ಮಹಿಳಾ ಮುಖಂಡೆ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ, ನಂತರ ಕ್ಷಮೆಯಾಚನೆ

ನೀರಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಬಂದಿದ್ದ ಮಹಿಳಾ ಮುಖಂಡೆ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಶಾಸಕ ಬಲರಾಮ್ ತವಾನಿ ಇಂದು ಆಕೆಯ ಬಳಿ ಕ್ಷಮೆಯಾಚಿಸಿದ್ದಾನೆ
ಮಹಿಳಾ ಮುಖಂಡೆಯೊಂದಿಗೆ ಬಿಜೆಪಿ ಶಾಸಕ
ಮಹಿಳಾ ಮುಖಂಡೆಯೊಂದಿಗೆ ಬಿಜೆಪಿ ಶಾಸಕ

ನರೋಡಾ : ನೀರಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಬಂದಿದ್ದ ಮಹಿಳಾ ಮುಖಂಡೆ  ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಶಾಸಕ ಬಲರಾಮ್   ತವಾನಿ ಇಂದು ಆಕೆಯ ಬಳಿ ಕ್ಷಮೆಯಾಚಿಸಿದ್ದಾನೆ. ನಮ್ಮ ನಡುವಿನ ಸಮಸ್ಯೆ ಬಗೆಹರಿದ್ದು, ನಿನ್ನೆ ನಡೆದ ಘಟನೆ ಬಗ್ಗೆ ಕ್ಷಮೆಯಾಚಿಸುತ್ತೇನೆ. ಆಕೆಗೆ ಯಾವ ರೀತಿಯ ಸಹಾಯ ಬೇಕಾಗಿದೆಯೋ ಅದೆಲ್ಲವನ್ನೂ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಎನ್ ಸಿಪಿ ಮುಖಂಡೆ ಮೇಲೆ ಬಲರಾಮ್ ತವಾನಿ  ಹಲ್ಲೆ ನಡೆಸಿದ ನಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿತ್ತು.

ನರೋಡಾದಲ್ಲಿನ ತವಾನಿ ಕಚೇರಿ ಬಳಿ ನಿನ್ನೆ ದಿನ ಈ ಘಟನೆ ನಡೆದಿತ್ತು.  ನೀರಿನ ಪೈಪ್ ಲೇನ್ ದುರಸ್ಥಿಗಾಗಿ ಆಗ್ರಹಿಸಿ ಇತರ ಮಹಿಳೆಯರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಮೇಲೆ ಶಾಸಕ ಬಲರಾಮ್ ತವಾನಿ ನಡುರಸ್ತೆಯಲ್ಲೇ ಕಾಲಿನಿಂದ ಒದ್ದು ಹಲ್ಲೆ ನಡೆಸಿರುವ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com