ಹೆಂಡತಿಯನ್ನು ಗೆಲ್ಲಿಸಲಾಗದವರ ಜೊತೆ ಸದ್ಯಕ್ಕಿಲ್ಲ ಮೈತ್ರಿ: ಮುರಿದು ಬಿದ್ದ ಮಹಾಘಟಬಂಧನ್!

ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನು ಗೆಲ್ಲಿಸಲಾಗದೇ ಸೋತಿದ್ದಾರೆ, ತಮ್ಮ ಇಬ್ಬರು ಸಹೋದರ ಸಂಬಂಧಿಗಳು ಕೂಡ ಸೋತಿದ್ದಾರೆ ಎಂದು ...
ಮಾಯಾವತಿ
ಮಾಯಾವತಿ
ಲಕ್ನೋ: ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನು ಗೆಲ್ಲಿಸಲಾಗದೇ ಸೋತಿದ್ದಾರೆ, ತಮ್ಮ ಇಬ್ಬರು ಸಹೋದರ ಸಂಬಂಧಿಗಳು ಕೂಡ ಸೋತಿದ್ದಾರೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಕಿಡಿ ಕಾರಿದ್ದಾರೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಎದುರು ನೆಲಕಚ್ಚಿದ ಉತ್ತರ ಪ್ರದೇಶದ ಎಸ್‌ಪಿ-ಬಿಎಸ್‌ಪಿ ಮಹಾಘಟಬಂಧನ ಮುರಿದು ಬಿದ್ದಿದೆ. 
ವಿಧಾನಸಭೆಗೆ ನಡೆಯಲಿರುವ 11 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ವರಿಷ್ಠೆ ಮಾಯಾವತಿ ಘೋಷಿಸಿದ್ದಾರೆ. 
ಇನ್ನೂ ಈ ಸಂಬಂಧ  ಪ್ರತಿಕ್ರಿಯಿಸಿರುವ ಮಾಯಾವತಿ ಇದು ಶಾಶ್ವತ ಬ್ರೇಕ್ ಅಪ್ ಅಲ್ಲ, ಭವಿಷ್ಯದಲ್ಲಿ ಸಮಾಜವಾದಿ ಪಕ್ಷ ರಾಜಕೀಯವಾಗಿ ಉತ್ತಮವಾದ ಯಶಸ್ಸು ಗಳಿಸಿದರೇ, ಮತ್ತೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಅದು ಸಾಧ್.ವಾಗದಿದ್ದರೇ ನಾವು ಪ್ರತ್ಯೇಕವಾಗಿಯೇ ಕೆಲಸ ಮಾಡುತ್ತೇವೆ, ಈ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com