ಕಡಪಾ ಜಿಲ್ಲೆ ರೈಲ್ವೆ ಕೊಡೂರ್ ಗ್ರಾಮದ ಅಬ್ದುಲ್ ಖಾದರ್ (26) ಹತ್ಯೆಯಾಗಿರುವ ದುರ್ದೈವಿ. ಈತ ಬೆಂಗಳೂರಿನಿಂದ ಆಗಮಿಸಿದ ಬಸ್ ನಿಂದಿಳಿದು ತನ್ನ ಮನೆಯತ್ತ ತೆರಳುತ್ತಿರುವಾಗ ಕೃಷ್ಣಾ ಚಿತ್ರಮಂದಿರ ಸಮೀಪ ಅವನನ್ನು ಸುತ್ತುಗಟ್ಟಿದ ಗುಂಪು ಚಾಕು ಹಾಗೂ ಮಾರಕಾಸ್ತ್ರಗಳಿಂದ ಅವನ ಮೇಲೆ ಮನಬಂದ್ಂತೆ ಹಲ್ಲೆ ನಡೆಸಿದೆ. ಇದರಿಂದ ತೀವ್ರ ಗಾಯಗೊಂಡ ಅಬ್ದುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.