ಕೇಂದ್ರ ಸಚಿವ ಗಿರಿರಾಜ್ ಹೇಳಿದ್ದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸದಾ ಸುದ್ದಿಯಲ್ಲಿರಬೇಕೆಂದು ಕೆಲವರು ಅನಗತ್ಯವಾಗಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ, ಹಾಗಾದರೂ ಮಾಧ್ಯಮಗಳಲ್ಲಿ ಬರಬೇಕೆಂಬುದು ಅವರ ಆಸೆ. ನಮ್ಮ ದೇಶದ ಪ್ರತಿ ಧರ್ಮದಲ್ಲಿ ಜನರಿಗೆ ಪ್ರೀತಿ ಗೌರವಗಳನ್ನು ತೋರಿಸುವುದನ್ನು ಹೇಳಿಕೊಡುತ್ತಾರೆ, ಆದರೆ ಇಂತವರಿಗೆ ಯಾವುದೇ ಧರ್ಮವಿಲ್ಲ ಎಂದು ನಿತೀಶ್ ಕುಮಾರ್ ಇಂದು ಪಾಟ್ನಾದಲ್ಲಿ ಮುಸಲ್ಮಾನ ಬಾಂಧವರ ಜೊತೆ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.