ಸನಾವುಲ್ಲಾಗೆ ಕಾಮರೂಪ ಜಿಲ್ಲೆಯನ್ನು ತೊರೆಯದಂತೆ ಕೋರ್ಟ್ ಸೂಚನೆ ನೀಡಿದೆ. ಇದೇ ವೇಳೆ ಕೋರ್ಟ್ ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ, ಬೋಕೋನಲ್ಲಿರುವ ವಿದೇಶಿ ಟ್ರಿಬ್ಯುನಲ್, ಎನ್ ಆರ್ ಸಿ ಅಧಿಕಾರಿಗಳು ಹಾಗೂ ಎನ್ ಆರ್ ಸಿ ಪ್ರಕ್ರಿಯೆ ವೇಳೆ ಸನಾವುಲ್ಲ ಅವರ ದಾಖಲೆಗಳನ್ನು ಪರಿಶೀಲಿಸಿದ್ದ ಅಧಿಕಾರಿಗಳಿಗೆ ಕೋರ್ಟ್ ನೊಟೀಸ್ ಜಾರಿಗೊಳಿಸಿದೆ.