ಯೋಗಿ ಆದಿತ್ಯನಾಥ್ ಅವರದ್ದು ಮೂರ್ಖತನದ ವರ್ತನೆ: ಪತ್ರಕರ್ತರ ಬಂಧನ ಕುರಿತು ರಾಹುಲ್ ಗಾಂಧಿ ಟೀಕೆ
ಅವಹೇಳನಕಾರಿ ಬರಹದ ಹಿನ್ನೆಲೆಯಲ್ಲಿ ಮೂವರು ಪತ್ರಕರ್ತರನ್ನು ಬಂಧಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವರ್ತನೆ ಮೂರ್ಖತನದಿಂದ ಕೂಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನವದೆಹಲಿ: ಅವಹೇಳನಕಾರಿ ಬರಹದ ಹಿನ್ನೆಲೆಯಲ್ಲಿ ಮೂವರು ಪತ್ರಕರ್ತರನ್ನು ಬಂಧಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವರ್ತನೆ ಮೂರ್ಖತನದಿಂದ ಕೂಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನನ್ನ ವಿರುದ್ಧ ಬಿಜೆಪಿ, ಆರ್ ಎಸ್ ಎಸ್ ಪ್ರಯೋಜಿತ ಸುಳ್ಳು ವರದಿ ಪ್ರಕಟಿಸುವ ಎಲ್ಲಾ ಪತ್ರಕರ್ತರನ್ನು ಜೈಲಿಗೆ ಕಳುಹಿಸುತ್ತೀರಾ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಬಹುತೇಕ ಎಲ್ಲಾ ಪತ್ರಿಕಾ ಹಾಗೂ ಸುದ್ದಿ ಚಾನೆಲ್ ಗಳು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತೀವೆ ಎಂದು ಹೇಳಿದ್ದಾರೆ.
ಪತ್ರಕರ್ತರನ್ನು ಬಂಧಿಸಿರುವುದು ಮೂರ್ಖತನದಿಂದ ಕೂಡಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಪತ್ರಕರ್ತರನ್ನು ಬಂಧಿಸುವ ಮೂಲಕ ನಮ್ಮ ದೇಶದ ಸಿದ್ಧಾಂತಗಳನ್ನು ಗಾಳಿಗೆ ತೂರಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
If every journalist who files a false report or peddles fake, vicious RSS/BJP sponsored propaganda about me is put in jail, most newspapers/ news channels would face a severe staff shortage.
The UP CM is behaving foolishly & needs to release the arrested journalists. https://t.co/KtHXUXbgKS