ಇನ್ನು ಆರೋಪಿ ಮನೀಶ್ ಶರ್ಮಾ ಹಾಗು ಯಾದವ್ ಇಬ್ಬರೂ ಹತ್ತಿರದ ಸಂಬಂಧಿಗಳಾಗಿದ್ದರೆಂದು ಹೇಳಿದ್ದು ಇಬ್ಬರೂ ತಮ್ಮ ಛೇಂಬರ್ ಗಳಲ್ಲಿ ವಕೀಲರನ್ನು ಭೇಟಿಯಾಗಿ ಬೆಂಬಲಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದ್ದರು.
ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದಂತೆ ಅಡ್ವೋಕೇಟ್ ಅರವಿಂದ್ ಮಿಶ್ರಾ ಅವರ ಕೊಠಡಿಯಲ್ಲಿದ್ದಾಗ ಇಬ್ಬರ ನಡುವೆ ಬಿರುಸಾದ ವಾಗ್ವಾದ ನಡೆದಿದೆ. ಆ ವೇಳೆ ತಾಳ್ಮೆ ಕಳೆದುಕೊಂಡ ಮನೀಶ್ ಶರ್ಮಾ ಜೇಬಿನಿಂದ ಪಿಸ್ತೂಲ್ ತೆಗೆದು ಯಾದವ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.