ತಾವರ್ ಚಂದ್ ಅವರು ನರೇಂದ್ರ ಮೋದಿ ಸಂಪುಟದಲ್ಲಿ ಎರಡನೇ ಅವಧಿಗೂ ಸಚಿವರಾಗಿ ಮುಂದುವರಿದಿದ್ದಾರೆ. ಗೆಹ್ಲೋಟ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಜವಾಬ್ದಾರಿ ಹೊತ್ತಿದ್ದಾರೆ. 1996ರಿಂದ 2009ರ ವರೆಗೆ ಮಧ್ಯ ಪ್ರದೇಶದ ಶಾಹಜಾಪುರ ಲೋಕಸಭೆ ಕ್ಷೇತ್ರ ಪ್ರತಿನಿಧಿಸಿದ್ದರು. 2009ರಲ್ಲಿ ಕಾಂಗ್ರೆಸ್ನ ಸಜ್ಜನ್ ಸಿಂಗ್ ವರ್ಮಾ ವಿರುದ್ಧ ಸೋಲು ಕಂಡಿದ್ದರು. ಇದಾಗಿ 2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಗೆಹ್ಲೋಟ್ ಅವರು, 2018ರಲ್ಲಿ ಮಧ್ಯಪ್ರದೇಶದಿಂದ ಮೇಲ್ಮನೆಗೆ ಮರು ಆಯ್ಕೆಯಾಗಿದ್ದಾರೆ. 2024ಕ್ಕೆ ಅವರ ರಾಜ್ಯಸಭೆ ಅವಧಿ ಕೊನೆಗೊಳ್ಳಲಿದೆ.