ರಾಜ್ಯಸಭೆಯಲ್ಲಿ ಅಂಗೀಕಾರವಾಗದೇ ಉಳಿಯುವ ಮಸೂದೆಗೆ, ಲೋಕಸಭೆ ವಿಸರ್ಜನೆಯಾದ ನಂತರವೂ ರಾಜ್ಯಸಭೆಯಲ್ಲಿ ಸಿಂಧುತ್ವ ಹಾಗೆಯೇ ಇರಲಿದೆ. ಆದರೆ ರಾಜ್ಯಸಭೆಯಲ್ಲಿ ಅಂಗೀಕಾರವಾಗದೇ ಉಳಿಯುವ ಮಸೂದೆ ಲೋಕಸಭೆಯ ವಿಸರ್ಜನೆಯ ನಂತರ ಲೋಕಸಭೆಯಲ್ಲಿ ಸಿಂಧುತ್ವ ಕಳೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಈಗ ಮತ್ತೊಮ್ಮೆ ಉಭಯ ಸದನಗಳಲ್ಲಿಯೂ ಮಂಡಿಸಿ ಅಂಗೀಕಾರ ಪಡೆಯುವ ಅಗತ್ಯವಿದೆ.