ವಡೋದರ: ಹೊಟೆಲ್ ಒಳಚರಂಡಿ ಸ್ವಚ್ಛತೆ ವೇಳೆ ಉಸಿರುಗಟ್ಟಿ 7 ಮಂದಿ ಸಾವು!

ಗುಜರಾತ್ ನ ವಡೋದರಾದಲ್ಲಿ ಭೀಕರ ಒಳಚರಂಡಿ ದುರಂತ ಸಂಭವಿಸಿದ್ದು, ಸ್ವಚ್ಛತೆ ವೇಳೆ ಉಸಿರುಗಟ್ಟಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಡೋದರ: ಗುಜರಾತ್ ನ ವಡೋದರಾದಲ್ಲಿ ಭೀಕರ ಒಳಚರಂಡಿ ದುರಂತ ಸಂಭವಿಸಿದ್ದು, ಸ್ವಚ್ಛತೆ ವೇಳೆ ಉಸಿರುಗಟ್ಟಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಡೋದರಾದ ದಭೋಯ್ ತೆಹ್ಸಿಲ್ ನ ಫರ್ತಿಕುಯ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಕಳೆದ 3 ದಿನಗಳಿಂದ ಇಲ್ಲಿನ ಹೊಟೆಲ್ ನ ಒಳಚರಂಡಿ ಕಟ್ಟಿಕೊಂಡಿತ್ತು. ಇದರ ಸ್ವಚ್ಛತೆಗಾಗಿ ನಾಲ್ಕು ಮಂದಿ ಕಾರ್ಮಿಕರು ಆಗಮಿಸಿದ್ದರು. ಒಳಚರಂಡಿ ಒಳಗೆ ಇಳಿದಿದ್ದ ನಾಲ್ಕು ಮಂದಿ ಕಾರ್ಮಿಕರು ಸುಮಾರು ಗಂಟೆಗಳೇ ಕಳೆದರೂ ಹೊರಗೆ ಬರಲಿಲ್ಲ. ಅನುಮಾನಗೊಂಡ ಹೊಟೆಲ್ ನ ಮೂವರು ಸಿಬ್ಬಂದಿಗಳು ಒಳಚರಂಡಿ ಒಳಗೆ ಇಳಿದಿದ್ದು, ಆಗ ಅವರೂ ಕೂಡ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಪ್ರಸ್ತುತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಈ ದುರಂತದ ಬಗ್ಗೆ ಜಿಲ್ಲಾಧಿಕಾರಿ ಕಿರಣ್ ಜವೇರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸ್ವಚ್ಛತೆಗಾಗಿ ಚರಂಡಿಯೊಳಗೆ ಇಳಿದಿದ್ದ ಕಾರ್ಮಿಕರು ಕುಸಿದಿದ್ದು, ಈ ವೇಳೆ ಅವರನ್ನು ರಕ್ಷಿಸಲು ಹೊಟೆಲ್ ಕಾರ್ಮಿಕರು ಕೂಡ ಚರಂಡಿಯೊಳಗೆ ಇಳಿದಿದ್ದಾರೆ. ಆಗ ಅವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com