ಅಹ್ಮದಾಬಾದ್: ವಾಯು ಚಂಡಮಾರುತದ ಅಬ್ಬರ ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮರುಕಳಿಸುವ ಭೀತಿ ಎದುರಾಗಿದೆ.
ರಾಜ್ಯದಿಂದ ಚಂಡಮಾರುತದ ಪಥ ಬದಲಾವಣೆಯಾಗಿದ್ದು ಯಾವುದೆ ಭೀತಿ ಇಲ್ಲ ಎಂದು ಗುಜರಾತ್ ಸಿಎಂ ವಿಜಯ್ ರುಪಾನಿ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಚಂಡಮಾರುತ ಮರುಕಳಿಸುವ ಭೀತಿ ಎದುರಾಗಿದೆ. ಜೂ.17-18 ರಂದು ಚಂಡಮಾರುತ ಗುಜರಾತ್ ನ ಕಛ್ ಗೆ ಅಪ್ಪಳಿಸಲಿದೆ ಎಂದು ವರದಿ ಪ್ರಕಟವಾಗಿದೆ.
ಜೂ.16 ರಂದು ಮತ್ತೊಮ್ಮೆ ಗುಜರಾತ್ ನ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿರುವ ಚಂಡಮಾರುತ ಜೂ.17-18 ರಂದು ಮರುಕಳಿಸಲಿದ್ದು, ಅಲರ್ಟ್ ಘೋಷಣೆ ಮಾಡಲಾಗಿದೆ.