ತಮ್ಮ ಆಡಳಿತ ಮಂಡಳಿಯ ಎರಡೂವರೆ ಗಂಟೆಗಳ ಸುದೀರ್ಘ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಿರಿಯ ವೈದ್ಯರ ಜಂಟಿ ವೇದಿಕೆಯ ವಕ್ತಾರರು, "ಈ ಬಿಕ್ಕಟ್ಟನ್ನು ಕೊನೆಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಸರ್ಕಾರದ ಮುಖ್ಯಸ್ಥರೊಡನೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಅವರು ಸಭೆಯು ಎಲ್ಲಿ ನಡೆಯಬೇಕೆಂದು ಸ್ಥಳವನ್ನು ಆಯ್ಕೆ ಮಾಡುವುದಕ್ಕೆ ಸ್ವತಂತ್ರರು. ಆದರೆ ಸಭೆಯು ಮುಕ್ತವಾಗಿ, ಮಾಧ್ಯಮ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯಬೇಕು ಹೊರತು ಮುಚ್ಚಿದ ಕೋಣೆಯಲ್ಲಲ್ಲ" ಎಂದಿದ್ದಾರೆ.