ಅಯೋಧ್ಯೆಯಲ್ಲಿ ಶಿವಸೇನಾ ಸಂಸದರೊಂದಿಗೆ ಉದ್ಧವ್ ಠಾಕ್ರೆ ವಿಶೇಷ ಪೂಜೆ

ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 18 ನೂತನ ಶಿವಸೇನಾ ಸಂಸದರೊಂದಿಗೆ ಪಕ್ಷದ ಅಧ್ಯಕ್ಷ ಉದ್ದವ್ ಠಾಕ್ರೆ ಇಂದು ಅಯೋಧ್ಯೆಯಲ್ಲಿನ ರಾಮ್ ಲಾಲ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಉದ್ಧವ್ ಠಾಕ್ರೆ ಜೊತೆಗೆ ಶಿವಸೇನಾ ಸಂಸದರು
ಉದ್ಧವ್ ಠಾಕ್ರೆ ಜೊತೆಗೆ ಶಿವಸೇನಾ ಸಂಸದರು
ಅಯೋಧ್ಯ: ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 18 ನೂತನ ಶಿವಸೇನಾ ಸಂಸದರೊಂದಿಗೆ ಪಕ್ಷದ ಅಧ್ಯಕ್ಷ ಉದ್ದವ್ ಠಾಕ್ರೆ ಇಂದು ಅಯೋಧ್ಯೆಯಲ್ಲಿನ ರಾಮ್ ಲಾಲ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇಂದು ಬೆಳಗ್ಗೆ ತಮ್ಮ ಪುತ್ರ ಅದಿತ್ಯ ಜೊತೆಗೆ ಉದ್ಧವ್ ಠಾಕ್ರೆ ಅಯೋಧ್ಯೆಗೆ ತೆರಳಿದ್ದು, ನಿನ್ನೆ ಸಂಜೆಯಿಂದ ಅಲ್ಲಿಯೇ ಇರುವ ಪಕ್ಷದ ಸಂಸದರನ್ನು ಭೇಟಿಯಾದರು. ನಂತರ ರಾಮ್ ಲಾಲ ದೇವಾಲಯದಲ್ಲಿ ಸಾಮೂಹಿಕವಾಗಿ ಪ್ರಾಥನೆ ಸಲ್ಲಿಸಿದರು.
ಮಧ್ಯಾಹ್ನ ಉದ್ದವ್ ಠಾಕ್ರೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮುಂಬೈಗೆ ಆಗಮಿಸಲಿದ್ದಾರೆ.
ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಮ ದೇವಾಲಯ ನಿರ್ಮಾಣ ವಿಚಾರದಲ್ಲಿ ಮೈತ್ರಿ ಪಕ್ಷವಾಗಿರುವ ಬಿಜೆಪಿ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ರೀತಿ ಶಿವಸೇನೆ ಅಯೋಧ್ಯೆಗೆ ಭೇಟಿ ನೀಡಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com