ಕಳೆದ ಶನಿವಾರ ಸಹ ಸಿಎಂ ಮಮತಾ ಬ್ಯಾನರ್ಜಿ ಅವರು ವೈದ್ಯರನ್ನು ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ಆಹ್ವಾನವನ್ನು ತಿರಸ್ಕರಿಸಿದ್ದ ವೈದ್ಯರು, ಗಾಯಾಳು ವೈದ್ಯರನ್ನು ಭೇಟಿ ಮಾಡುವಂತೆ ಒತ್ತಾಯಿಸಿದ್ದಾರೆ. ಇದೀಗ ಸಿಎಂ ಜೊತೆಗೆ ಮಾತುಕತೆಗೆ ವೈದ್ಯರು ಮುಂದಾಗಿದ್ದು, ವೈದ್ಯರ ಜೊತೆಗಿನ ಸಭೆ ಯಶಸ್ವಿಯಾಗಿ, ಮುಷ್ಕರ ಹಿಂಪಡೆಯುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.