ಸ್ಪೀಕರ್ ಹುದ್ದೆಗಾಗಿ ನಾಳೆ ಚುನಾವಣೆ ನಡೆಯಲಿದ್ದು, ಬಿಜೆಡಿ, ಶಿವಸೇನಾ, ಅಕಾಲಿ ದಳ, ಎನ್ ಪಿಪಿ, ಎಂಎನ್ ಎಫ್, ಲೋಕ ಜನಾಶಕ್ತಿ ಪಾರ್ಟಿ, ವೈಎಸ್ ಆರ್ ಕಾಂಗ್ರೆಸ್ , ಜೆಡಿಯು, ಎಐಎಡಿಎಂಕೆ, ಅಪ್ನಾ ದಳ ಪಕ್ಷಗಳು ಬೆಂಬಲ ನೀಡಿವೆ. ಕಾಂಗ್ರೆಸ್ ಮುಖಂಡರಾದ ಕೆ. ಸುರೇಶ್ , ಗುಲಾಂ ನಬಿ ಅಜಾದ್ ಜೊತೆಗೆ ಮಾತನಾಡಿದ್ದೇನೆ. ಈವರೆಗೂ ಅವರು ಸಹಿ ಮಾಡಿಲ್ಲ. ಆದರೆ, ಅವರು ಬಿರ್ಲಾರನ್ನು ವಿರೋಧಿಸುವುದಿಲ್ಲ ಅನ್ನಿಸುತ್ತಿದೆ ಎಂದು ಹೇಳಿದರು.