ನಿನ್ನೆಯ ಸಭೆಯಲ್ಲಿ ಪ್ರತಿಪಕ್ಷಗಳು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಹಲವು ವಿರೋಧ ಪಕ್ಷಗಳ ನಾಯಕರು ಸಭೆಗೆ ಹಾಜರಾಗಿರಲಿಲ್ಲ. ಡಿಎಂಕೆ ನಾಯಕರಾದ ಕನ್ನಿಮೋಳಿ, ಟಿ ಆರ್ ಬಾಲು, ಸಿಪಿಐಯ ಡಿ ರಾಜಾ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ ಉಪಸ್ಥಿತರಿದ್ದರು. ಮೋದಿಯವರು ಕರೆದಿರುವ ಸಭೆಗೆ ಹೋಗಬೇಕೆ, ಬೇಡವೇ ಎಂಬುದನ್ನು ಇಂದು ನಡೆಯುವ ಸಭೆಯಲ್ಲಿ ವಿರೋಧ ಪಕ್ಷಗಳು ನಿರ್ಧರಿಸುವ ಸಾಧ್ಯತೆಯಿದೆ.