ಇನ್ನು ಶಿಕ್ಷಕನಿಂದ ಕಠಿಣ ಶಿಕ್ಷೆಗೆ ಗುರಿಯಾಗಿರುವ ಮಕ್ಕಳು ಗುಜ್ಜರ್ ಮತ್ತು ಬಕ್ಕರ್ವಾಲ್ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಾಸ್ಟೆಲ್ ನಲ್ಲಿ ವಾಸಿಸುವ ಮಕ್ಕಳು ತಮ್ಮ ತರಗತಿಗೆ ಹತ್ತು ನಿಮಿಷ ತಡವಾಗಿ ಬಂದಿದ್ದಾರೆ. ಮಕ್ಕಳನ್ನು ಮಂಡಿಯೂರಿ ಕಿವಿ ಹಿಡಿಯುವಂತೆ ಶಿಕ್ಷಿಸಿದ್ದಾನೆ. ಬಹಳ ಸಮಯ ಶಿಕ್ಷೆ ಅನುಭವಿಸಿದ ಮಕ್ಕಳು ಶಿಕ್ಷಕರ ಬಳಿ ಮಾತನಾಡಲು ಮುಂದಾದಾಗ, ಕ್ರೂರವಾಗಿ ವರ್ತಿಸಿದ ಶಿಕ್ಷಕ ಮಕ್ಕಳ ಮೈಮೇಲೆ ಬರೆ ಬರುವ ಮಟ್ಟಿಗೆ ಹೊಡೆದಿದ್ದಾರೆ.