ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಬಕ್ಸಾ ಜಿಲ್ಲೆಯ ತಮುಲ್ಪುರದ ವ್ಯಾಪ್ತಿಯ ಧುಲಾಬಾರಿ ಮೂಲದ ಲಖ್ಮನ್ ತನ್ನ ಹಳ್ಳಿಯಿಂದ ದ್ವಿಚಕ್ರ ವಾಹನದಲ್ಲಿ ಗುವಾಹಟಿಯ ಸರೈಘಾಟ್ ಸೇತುವೆಯನ್ನು ತಲುಪಿದರು. ಅವರು ಪರ್ಸ್, ಮೊಬೈಲ್ ಫೋನ್, ಗುರುತಿನ ದಾಖಲೆಗಳು, ಚಪ್ಪಲಿಗಳು ಸೇರಿದಂತೆ ದ್ವಿಚಕ್ರ ವಾಹನವನ್ನು ಸೇತುವೆಯ ಮೇಲೆ ಬಿಟ್ಟು ಬ್ರಹ್ಮಪುತ್ರಕ್ಕೆ ಹಾರಿದ್ದಾನೆ. ಆದರೆ ನದಿಗೆ ಹಾರಿದ್ದಷ್ಟೆ, ಆತ ನೀರಿನ ಮೇಲೆ ತೇಲುವ ಕಮಲದಂತಹಾ ಗಿಡದ ಎಲೆಗಳು, ಬಾಳೆ ಎಲ್ಲೆಗಳನ್ನು ಕಂಡಿದ್ದಾರೆ. ಮತ್ತು ಅದರ ಸಹಾಯದಿಂದ ಈಜಲು ಪ್ರಾರಂಭಿಸಿದ್ದಾರೆ. ರಾತ್ರಿಯಿಡೀ ಹತ್ತು ಗಂಟೆಗಳ ಕಾಲ ಈಜಿದ ನಂತರ, ಮರುದಿನ ಬೆಳಿಗ್ಗೆ ಕೆಳಗಿನ ಅಸ್ಸಾಂಬಾರ್ಪೆಟಾ ಜಿಲ್ಲೆಯ ಬೋಹೊರಿಯಲ್ಲಿ ದೋಣಿಗಾರರು ಈತನನ್ನು ರಕ್ಷಿಸಿದ್ದಾರೆ.