ಗುಂಟೂರ್: ವಧುವಿನ ಜಾರಿಯ ಕುರಿತಾಗಿ ಮೂಡಿದ ಅನುಮಾನವೇ ಸಂಭ್ರದಿಂದ ನಡೆಯಬೇಕಿದ್ದ ಮದುವೆಯನ್ನು ಕಡೇ ಕ್ಷಣದಲ್ಲಿ ರದ್ದಾಗುವಂತೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪೆದಕಕೇಣಿ ಎಂಬಲ್ಲಿ ನಡೆದಿದೆ. ಭಾನುವಾರ ರಾತ್ರಿ ನಡೆದ ಈ ಪ್ರಕರಣದ ಕುರಿತು ಯಾವುದೇ ಮಹತ್ವದ ಕಾರಣವಿಲ್ಲದೆ ವಿವಾಹವನ್ನು ರದ್ದುಗೊಳಿಸಿದ ಆರೋಪ ಮಾಡಿ ವಧುವಿನ ಕುಟುಂಬ ವರನ ಕಡೆಯವರ ಮೇಲೆ ಪೋಲೀಸರಿಗೆ ದೂರು ಸಲ್ಲಿಸಿದೆ.