ವಿಧೇಯಕಗಳು ಸಂಸದೀಯ ಸ್ಥಾಯಿ ಸಮಿತಿಗಳ ಮೂಲಕ ಪರಿಶೀಲನೆಗೊಳಗಾಗಬೇಕಾದ ಪ್ರಕ್ರಿಯೆಯನ್ನೇಬದಲಾಯಿಸಿರುವ ಪ್ರಧಾನಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆನಂದ ಶರ್ಮಾ, ಪ್ರತಿಯೊಂದು ವಿಧೇಯಕವೂ ಸೂಕ್ತ ಪರಿಶೀಲನೆ ನಂತರ ಅಂಗೀಕಾರವಾಗಬೇಕು ಎಂಬುದನ್ನು ಖಾತರಿ ಪಡಿಸುವುದು ರಾಜ್ಯಸಭೆಯ ಹೊಣೆಗಾರಿಕೆಯಾಗಿದೆ. ಆದರೆ, ರಾಜ್ಯಸಭೆಯನ್ನು, ರಬ್ಬರ್ ಸ್ಟಾಂಪ್ ಎಂದು ಸರ್ಕಾರ ಪರಿಗಣಿಸಿದೆ. ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.