ಆದರೆ ಮುಳುಗುತ್ತಿರುವ ಹಡಗಿನ ನಾವಿಕನಾಗಲು ಯಾರು ಇಚ್ಛಿಸುತ್ತಾರೆ ಎಂಬಂತೆ ಸೋಲಿನಿಂದ ಕಂಗೆಟ್ಟು ಹೋಗಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದಿಯನ್ನು ಏರಲು ಕೆಲವು ಹಿರಿಯ ನಾಯಕರು ಬಿಟ್ಟರೆ ಸದ್ಯ ಯಾರೂ ಮನಸ್ಸು ಮಾಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಯವರನ್ನು ಕೇಳಲಾಗಿತ್ತು, ಆದರೆ ಅವರು ಯಾರಾದರೂ ಕಿರಿ ವಯಸ್ಸಿನವರು ಅಧ್ಯಕ್ಷ ಹುದ್ದೆ ವಹಿಸಿಕೊಂಡರೆ ಉತ್ತಮ ಎಂದು ಹೇಳಿದ್ದಾರೆ.