ಒಡಿಶಾ ಕಾಂಗ್ರೆಸ್ ಅಭ್ಯರ್ಥಿಯ ಕೊಲೆ: ಪ್ರಮುಖ ಆರೋಪಿಯ ಬಂಧನ

ಒಡಿಶಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಜೂ.29 ರಂದು ಬಂಧಿಸಿದ್ದಾರೆ.
ಒಡಿಶಾ ಕಾಂಗ್ರೆಸ್ ಅಭ್ಯರ್ಥಿಯ ಕೊಲೆ: ಪ್ರಮುಖ ಆರೋಪಿಯ ಬಂಧನ
ಒಡಿಶಾ ಕಾಂಗ್ರೆಸ್ ಅಭ್ಯರ್ಥಿಯ ಕೊಲೆ: ಪ್ರಮುಖ ಆರೋಪಿಯ ಬಂಧನ
ಒಡಿಶಾ: ಒಡಿಶಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಜೂ.29 ರಂದು ಬಂಧಿಸಿದ್ದಾರೆ.
2019 ರಲ್ಲಿ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಆಸ್ಕಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮನೋಜ್ ಕುಮಾರ್ ಜೀನಾ ಸ್ಪರ್ಧಿಸಿದ್ದರು. ಮೇ.22 ರಂದು ಮತ ಎಣಿಕೆಗೂ ಮುನ್ನ ಮನೋಜ್ ಕುಮಾರ್ ಹತ್ಯೆಯಾಗಿತ್ತು. ಹತ್ಯೆಯ ಪ್ರಮುಖ ಆರೋಪಿ ಭಗವಾನ್ ಸಾಹು ಅಲಿಯಾಸ್ ಭಲು ಸುಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ನಾಯಕನ ಹತ್ಯೆಗೆ ಉದ್ಯಮದಲ್ಲಿದ್ದ ಹಳೆಯ ವೈಷಮ್ಯವೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com