ಜಮ್ಮು ಕಾಶ್ಮೀರ: ಕಣಿವೆಗೆ ಉರುಳಿದ ಬಸ್, 6 ಸಾವು,, 31 ಮಂದಿಗೆ ಗಾಯ

ಬಸ್ಸೊಂದು ಕಣಿವೆಗೆ ಬಿದ್ದು ಆರು ಮಂದಿ ಸಾವನ್ನಪ್ಪಿ 31ಕ್ಕೆ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಜಮ್ಮು ಕಾಶ್ಮೀರದ ಉಧಂಪುರ್ ನಲ್ಲಿ ನಡೆದಿದೆ.
ಜಮ್ಮು ಕಾಶ್ಮೀರ: ಕಣಿವೆಗೆ ಉರುಳಿದ ಬಸ್, 6 ಸಾವು,, 31ಮಂದಿಗೆ ಗಾಯ
ಜಮ್ಮು ಕಾಶ್ಮೀರ: ಕಣಿವೆಗೆ ಉರುಳಿದ ಬಸ್, 6 ಸಾವು,, 31ಮಂದಿಗೆ ಗಾಯ
ಶ್ರೀನಗರ: ಬಸ್ಸೊಂದು ಕಣಿವೆಗೆ ಬಿದ್ದು ಆರು ಮಂದಿ ಸಾವನ್ನಪ್ಪಿ 31ಕ್ಕೆ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ  ಜಮ್ಮು ಕಾಶ್ಮೀರದ ಉಧಂಪುರ್ ನಲ್ಲಿ ನಡೆದಿದೆ.
ಉಧಂಪುರದ ಮಜಾಲ್ತಾ  ಎನ್ನುವಲ್ಲಿ ಶುಕ್ರವಾರ ಮಧ್ಯರಾತ್ರಿ ಈ ದುರ್ಘಟನೆ ಸಂಭವಿಸ್ದ್ದು ಮಹಿಳೆ ಸೇರಿ ಆರು ಮಂದಿ ಸಾವಿಗೀಡಾಗಿದ್ದಾರೆ. 31ಕ್ಕೆ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಉಧಂಪುರ್ ನಿಂದ ಶ್ರೀನಗರಕ್ಕೆ ಬಸ್ ಚಲಿಸುತ್ತಿತ್ತು. ಮಧ್ಯರಾತ್ರಿ ೧೨.೩೦ರ ವೇಳೆಗೆ ಚಾಲಕನ ನಿಯ್ತಂತ್ರಣ ತಪ್ಪಿದ ಬಸ್ ಕಣಿವೆಗೆ ಉರುಳಿದೆ. ಈ ವೇಳೆ ಐವರು ಸ್ಥಳದಲ್ಲೇ ಮೃತಪಟ್ಟರೆ ಓರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಅಎನ್ ಐ ವರದಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com