ಈ ಹಿಂದೆ ಹೇಳಿಕೆ ಹೊರಡಿಸಿದ್ದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ, ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ದೇಶದ ಯೋಧರ ಧೈರ್ಯ, ಪರಾಕ್ರಮ ಮತ್ತು ತ್ಯಾಗವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಮೋದಿಯವರ ದಿಕ್ಕು ದೆಸೆಯಿಲ್ಲದ ನೀತಿಗಳು ಮತ್ತು ಆರ್ಥಿಕ ಸಮೀಪ ದೃಷ್ಟಿಕೋನಗಳು ಭಾರತದ ಆರ್ಥಿಕತೆಗೆ ಹಿನ್ನಡೆಯಾಗಿದೆ. ಮೋದಿಯವರ ಆರ್ಥಿಕ ನೀತಿ ದೇಶಕ್ಕೆ ಮಾರಕ ಎಂದು ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.