ಪಾಕಿಸ್ತಾನದ ಬಾಲಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿದ ಬಳಿಕ ಭಾರತ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುವಂತೆ ಮಾಡುತ್ತಿದೆ. ಜೊತೆ ಜೊತೆಗೇ ತನ್ನ ಸೇನೆಯನ್ನೂ ಸನ್ನದ್ಧವಾಗಿಟ್ಟುಕೊಂಡಿದ್ದು, ಮತ್ತೊಂದು ಉಗ್ರ ದಾಳಿಗೆ ಅವಕಾಶ ನೀಡದೇ ಇರಲು ಕ್ರಮ ಕೈಗೊಂಡಿದೆ. ಆದರೆ ಪಾಕಿಸ್ತಾನ ತನ್ನ ಎಂದಿನ ಚಾಳಿಯನ್ನು ಮುಂದುವರೆಸಿದ್ದೇ ಆದಲ್ಲಿ ತನ್ನ ಮುಂದಿರುವ ಎಲ್ಲಾ ಆಯ್ಕೆಗಳಿಗೂ ಮುಕ್ತವಾಗಿದೆ ಎನ್ನುತ್ತಿದೆ ಭಾರತ ಸರ್ಕಾರ.