ಬೈಜಯಂತ್ ಜಯ್ ಪಾಂಡಾ - ಅಮಿತ್ ಶಾ
ಬೈಜಯಂತ್ ಜಯ್ ಪಾಂಡಾ - ಅಮಿತ್ ಶಾ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ, ವಕ್ತಾರರಾಗಿ ಬೈಜಯಂತ್ ಪಾಂಡಾ ನೇಮಕ

ಇತ್ತೀಚಿಗಷ್ಟೇ ಬಿಜೆಡಿ ತೊರೆದು ಕೇಸರಿಪಡೆ ಸೇರಿದ್ದ ಒಡಿಶಾದ ಮಾಜಿ ಸಂಸದ ಬೈಜಯಂತ್ ಜಯ್ ಪಾಂಡಾ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ...
ನವದೆಹಲಿ: ಇತ್ತೀಚಿಗಷ್ಟೇ ಬಿಜೆಡಿ ತೊರೆದು ಕೇಸರಿಪಡೆ ಸೇರಿದ್ದ ಒಡಿಶಾದ ಮಾಜಿ ಸಂಸದ ಬೈಜಯಂತ್ ಜಯ್ ಪಾಂಡಾ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
ತಮ್ಮನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಹಾಗೂ ವಕ್ತಾರರಾಗಿ ನೇಮಕ ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಪಕ್ಷಕ್ಕಾಗಿ ನಾನು ಉತ್ತಮ ಕೆಲಸ ಮಾಡಲು ಎಲ್ಲಾ ಸಹೋದ್ಯೋಗಿಗಳು ನನಗೆ ಸಹಕಾರ ನೀಡಬೇಕು ಎಂದು ಪಾಂಡಾ ಅವರು ಟ್ವೀಟ್ ಮಾಡಿದ್ದಾರೆ.
ಪಾಂಡಾ ಅವರು ಕಳೆದ ಮಾರ್ಚ್ 4ರಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು.

Related Stories

No stories found.

Advertisement

X
Kannada Prabha
www.kannadaprabha.com