ಬದರಿನಾಥ, ಕೇದಾರನಾಥ ದೇಗುಲ ಸಮಿತಿಗೆ ಅನಂತ್ ಅಂಬಾನಿ ನೇಮಕ!

ಪ್ರಸಿದ್ಧ ತೀರ್ಥ ಕ್ಷೇತ್ರ ಬದರಿನಾಥ, ಕೇದಾರನಾಥ​ ದೇಗುಲ ಸಮಿತಿಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ಅವರು ಉದ್ಯಮಿ ಮುಖೇಶ್ ಅಂಬಾನಿ ...
ಅನಂತ್ ಅಂಬಾನಿ
ಅನಂತ್ ಅಂಬಾನಿ
ಡೆಹ್ರಾಡೂನ್: ಪ್ರಸಿದ್ಧ ತೀರ್ಥ ಕ್ಷೇತ್ರ ಬದರಿನಾಥ, ಕೇದಾರನಾಥ​ ದೇಗುಲ ಸಮಿತಿಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ಅವರು ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್​ ಅಂಬಾನಿ ಅವರನ್ನು ನೇಮಕ ಮಾಡಿದ್ದಾರೆ. 
ಮುಖೇಶ್​ಅಂಬಾನಿ ಕುಟುಂಬವು ಬದರಿನಾಥ ಮತ್ತು ಕೇದಾರನಾಥ ದೇಗುಲಕ್ಕೆ ನಿಯಮಿತವಾಗಿ ಭೇಟಿ ನೀಡುವ ಸಂಪ್ರದಾಯ ಹೊಂದಿದೆ. ಅಲ್ಲದೆ, ಕೇದಾರನಾಥ ಮತ್ತು ಬದರಿನಾಥ ದೇಗುಲಗಳ ಪುನರ್​ ನವೀಕರಣ ಕಾರ್ಯದಲ್ಲಿ ತಾವೂ ಭಾಗಿಯಾಗುವುದಾಗಿ ದೇಗುಲ ಸಮಿತಿಗೆ ಎರಡು ವರ್ಷಗಳ ಹಿಂದೆ ಮುಖೇಶ್​ಪ್ರಸ್ತಾವ ನೀಡಿದ್ದರು. 
ತಮ್ಮ ಕುಟುಂಬದಲ್ಲಿ ಯಾವುದಾದರೂ ಮಹತ್ತರ ಬೆಳವಣಿಗೆ ನಡೆಯುವುದಕ್ಕೂ ಮೊದಲು ದೇಗುಲಕ್ಕೆ ಭೇಟಿ ನೀಡುವುದನ್ನು ಮುಖೇಶ್​ ರೂಢಿಯಾಗಿಟ್ಟುಕೊಂಡಿದ್ದಾರೆ. ತಮ್ಮ ಪುತ್ರಿಯ ವಿವಾಹಕ್ಕೂ ಮೊದಲು ದೇಗುಲಕ್ಕೆ ಬಂದಿದ್ದ ಅವರು, ಆಶೀರ್ವಾದ ಪಡೆದು ಹೋಗಿದ್ದರು. ನಂತರ, ಆಹ್ವಾನ ಪತ್ರಿಕೆಯನ್ನು ಮೊದಲು ದೇಗುಲಕ್ಕೇ ಸಮರ್ಪಿಸಿದ್ದರು. 
ಕೇದಾರನಾಥ ದೇವಾಲಯ ಶಿವನ ದೇವಾಲಯವಾಗಿದೆ, ಮಂದಾಕಿನಿ ನದಿಯ ಹಿಮಾಲಯ ಪ್ರದೇಶದಲ್ಲಿ ಈ ದೇವಾಲಯ ಸ್ಥಾಪಿತವಾಗಿದೆ. ಕೇದಾರನಾಥ ದೇವಾಲಯ ಉತ್ತಾರಖಂಡ್ ನಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com