ಜೈಶ್ ಪುಲ್ವಾಮಾ ದಾಳಿ ಹೊಣೆ ಹೊತ್ತಿದ್ರೂ ಸಾಕ್ಷಿ ಬೇಕ ನಿಮಗೆ: ಪಾಕ್ ಬೆವರಿಳಿಸಿದ ನಿರ್ಮಲಾ ಸೀತಾರಾಮನ್!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಉಗ್ರ ದಾಳಿಯ ಹೊಣೆಯನ್ನು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತಿದ್ದರು. ದಾಳಿಯ ಬಗ್ಗೆ ಸಾಕ್ಷಿ ಕೇಳುತ್ತೀರಾ...
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ಕೋಲ್ಕತ್ತಾ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಉಗ್ರ ದಾಳಿಯ ಹೊಣೆಯನ್ನು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತಿದ್ದರು. ದಾಳಿಯ ಬಗ್ಗೆ ಸಾಕ್ಷಿ ಕೇಳುತ್ತೀರಾ ಎಂದು ಪಾಕಿಸ್ತಾನ ವಿರುದ್ಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.
2008ರಲ್ಲಿ ನಡೆದಿದ್ದ ಮುಂಬೈ ದಾಳಿಯ ಕುರಿತಾಗಿ ಭಾರತ ನಿಮಗೆ ಸಾಕಷ್ಟು ಸಾಕ್ಷಿ ನೀಡಿತ್ತು. ಆದರೂ ನೀವು ಏನು ಮಾಡಲಿಲ್ಲ. ಕಳದೆ ತಿಂಗಳು ಪುಲ್ವಾಮಾದಲ್ಲಿ ದಾಳಿ ನಡೆದಾಗ ಜೈಶ್ ಎ ಮೊಹಮ್ಮದ್ ಸಂಘಟನೆಯೇ ಈ ದಾಳಿಯ ಹೊಣೆ ಹೊತ್ತಿಕೊಂಡಿತ್ತು. ಹೀಗಿದ್ದರು ನಿಮಗಿನ್ನು ಸಾಕ್ಷಿಬೇಕ? ನಮ್ಮಂತೆ ಭಯೋತ್ಪಾದನೆ ವಿರುದ್ಧ ನೀವೂ ಕ್ರಮಕೈಗೊಳ್ಳಿ ಎಂದಿದ್ದಾರೆ.
ಭಯೋತ್ಪಾದನೆಗೆ ನೀವೂ ಬಲಿಪಶುವಾಗಿದ್ದರೆ, ಅದನ್ನು ತೊಡೆದು ಹಾಕುವುದಿಲ್ಲವೇ? ಅದಕ್ಕಾಗಿಯೇ ಮನಮೋಹನ್ ಸಿಂಗ್ ಮಾಡದೇ ಇದ್ದಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com