ರಸ್ತೆ ಬದಿಯ ಹೊಟೆಲ್ ನಲ್ಲೇ ಊಟ, ಸೈಕಲ್ ಸವಾರಿ; ಪರಿಕ್ಕರ್ ಎಂಬ ಸಾಮಾನ್ಯರ ಮಿನಿಸ್ಟರ್!

ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಜನತೆಗಾಗಿ ದುಡಿದು ಇಹಲೋಕ ತ್ಯಜಿಸಿರುವ ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರು ತಮ್ಮ ಸರಳ ಸ್ವಭಾವದಿಂದಲೇ ಖ್ಯಾತರಾದವರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಣಜಿ: ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಜನತೆಗಾಗಿ ದುಡಿದು ಇಹಲೋಕ ತ್ಯಜಿಸಿರುವ ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರು ತಮ್ಮ ಸರಳ ಸ್ವಭಾವದಿಂದಲೇ ಖ್ಯಾತರಾದವರು.
ಮನೋಹರ್​ ಪರಿಕ್ಕರ್​ ಅವರು ಸರಳ ಸ್ವಭಾವದವರು. ಅವರು ಎಂದಿಗೂ ಐಶ್ವರ್ಯ, ಸುಪ್ಪತ್ತಿಗೆಯನ್ನು ಹುಡುಕಿ ಹೋದವರಲ್ಲ. ಸರಳತೆಯ ಮೂರ್ತಿಯಂತಿದ್ದ ಪರಿಕ್ಕರ್​ ಆಗಾಗ್ಗೆ ತಮ್ಮ ಸರಳತೆಯಿಂದಲೇ ಸುದ್ದಿಯಾಗುತ್ತಿದ್ದರು. 
ಪರಿಕ್ಕರ್ ಅವರ ಸರಳತೆ ಕೆಲ ಮೆಲುಕುಗಳು ಇಲ್ಲಿವೆ.
ಪರಿಕ್ಕರ್​ ಒಮ್ಮೆ ಟೀ ಕುಡಿಯಲು ಬೀದಿ ಬದಿಯ ಚಹಾ ಅಂಗಡಿಗೆ ಬಂದಿದ್ದರು. ರಕ್ಷಣಾ ಸಚಿವರಾಗಿದ್ದಾಗಲೇ ಪರಿಕ್ಕರ್​ ಅವರು ಈ ರೀತಿ ನಡೆದುಕೊಂಡಿದ್ದು ಅಕ್ಷರಶಃ ಜನರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿಬಿಟ್ಟಿತ್ತು. 
ಸೈಕಲ್​ ಸವಾರಿ: ಪರಿಕ್ಕರ್​ ಅವರು ಒಮ್ಮೆ ಶಾಲೆಗೆ ಭೇಟಿ ನೀಡಿದ್ದಾಗ ವಿದ್ಯಾರ್ಥಿಯೊಬ್ಬನ ಸೈಕಲ್​ ತುಳಿದು ತಮ್ಮ ಬಾಲ್ಯದ ಘಟನೆಗಳ ನೆನೆದು ಸಂಭ್ರಮಿಸಿದ್ದರು. ಆ ಬಳಿಕ ಪರಿಕ್ಕರ್ ಅವರ ಸೈಕಲ್ ಸವಾರಿ ಕೂಡ ಸುದ್ದಿಯಾಗಿತ್ತು. 
ಬೈಕ್​ ಸುತ್ತಾಟ: ಪರಿಕ್ಕರ್​ ಅವರಿಗೆ ಅಪಾರ ಮಿತ್ರರು. ಒಮ್ಮೆ ಬೈಕ್​ ರಾಲಿ ನಡೆಯುವಾಗ ಸಿಎಂ ಸ್ಥಾನದಲ್ಲಿದ್ದ ಪರಿಕ್ಕರ್​ ಅವರೇ ಸ್ನೇಹಿತನ ಬೈಕ್​ನಲ್ಲಿ ಸುತ್ತಾಡಿದ್ದರು. 
ಮತದಾನಕ್ಕೆ ಕ್ಯೂ: ಪರಿಕ್ಕರ್​ ಅವರು ಮತ ಹಾಕುವ ಸಂದರ್ಬದಲ್ಲಿ ಸಾಮಾನ್ಯರಂತೆ ಕ್ಯೂನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದರು. 
ವಧುವರರಿಗೆ ಗಿಫ್ಟ್​ ಕೊಡಲು ಬಂದರು: ಪರಿಕ್ಕರ್​ ಅವರು ತಮ್ಮ ಸ್ನೇಹಿತರೊಬ್ಬರ ಮಗನ ಮದುವೆಗೆ ಬಂದಿದ್ದಾಗ ಇತರರಂತೆ ತಾವೂ ಕೂಡ ಕ್ಯೂನಲ್ಲಿ ನಿಂತು ಬಂದು ಒಂದು ಗಿಫ್ಟ್​ ಕೊಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com