ಕೇಂದ್ರ ಸಚಿವ ಸಂಪುಟ ಸದಸ್ಯರು ಹೊರಡಿಸಿದ ನಿರ್ಣಯದಲ್ಲಿ, ಪರ್ರಿಕರ್ ಅವರ ಸರಳತೆ ಮತ್ತು ಅದ್ವಿತೀಯ ಆಡಳಿತ ಎಲ್ಲರಿಗೂ ಮಾದರಿಯಾದದ್ದು. ಆಧುನಿಕ ಗೋವಾ ನಿರ್ಮಾಣದಲ್ಲಿ ಮತ್ತು ಭಾರತೀಯ ಸೇನಾ ಪಡೆಯ ಆಧುನೀಕರಣಕ್ಕೆ ಹಾಗೂ ಮಾಜಿ ಸೈನಿಕರ ಜೀವನ ಮಟ್ಟ ಸುಧಾರಣೆಗೆ ಅವರ ಸೇವೆ ಅಪಾರ ಎಂದು ನಿರ್ಣಯದಲ್ಲಿ ಹೇಳಲಾಗಿದೆ.