ಅರ್ಧಕ್ಕೆ ನಿಂತು ಹೋಗಿರುವ ಸೇತುಸಮುದ್ರಂ ಯೋಜನೆಯನ್ನು ಪುನರಾರಂಭಗೊಳಿಸುವುದು, ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ದರವನ್ನು ನಿಯಂತ್ರಣದಲ್ಲಿರಿಸುವುದು. ಕಾವೇರಿ ಹಾಗೂ ಗೋದಾವರಿ ನದಿ ಯೋಜನೆಗಳನ್ನು ಜೋಡಿಸುವುದು. ಕೊಡನಾಡು ಎಸ್ಟೇಟ್ ದರೋಡೆ ಪ್ರಕರಣವನ್ನು ಸಿಬಿಐಗೆ ವಹಿಸುವುದು. ಪುದುಚೇರಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡುವುದು. ಸೇತು ಸಮುದ್ರ ಯೋಜನೆಯನ್ನು ಪುನರ್ ಆರಂಭಿಸುವುದು, ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿ ಹಾಗೂ ನೀಟ್ ರದ್ದುಗೊಳಿಸುವುದು ಸೇರಿದಂತೆ ಡಿಎಂಕೆ ಅನೇಕ ಭರವಸೆಗಳನ್ನು ನೀಡಿದೆ.