ಗುರುಗ್ರಾಮ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅಜಿತ್ ಧೋವಲ್ ಅವರು ಪುಲ್ವಾಮಾ ದಾಳಿಯ ಪ್ರತೀಕಾರ ಇನ್ನೂ ಮುಗಿದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಿಆರ್ಪಿಎಫ್ ನ 80 ವರ್ಷಾಚರಣೆಯಲ್ಲಿ ಪಾಲ್ಗೊಂಡ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಪುಲ್ವಾಮಾದಲ್ಲಿನ ಯೋಧರ ಬಲಿದಾನ ಅತ್ಯಂತ ಪ್ರಮುಖವಾಗಿದ್ದು ಇದನ್ನು ಭಾರತ ದೇಶ ಹಾಗೂ ಭಾರತೀಯರು ಯಾವತ್ತೂ ಮರೆಯುವುದಿಲ್ಲ ಎಂದಿದ್ದಾರೆ.
ಪುಲ್ವಾಮಾ ದಾಳಿಯ ಪ್ರತೀಕಾರ ಇನ್ನೂ ಮುಗಿದಿಲ್ಲ. ಉಗ್ರರು ಸಂಪೂರ್ಣ ನಿರ್ನಾಮವಾಗುವವರೆಗೆ ಸರ್ಜಿಕಲ್ ಸ್ಟ್ರೈಕ್ ಗಳು ಮುಂದುವರಿಯಲಿದೆ. ಯಾವ ಸಂದರ್ಭದಲ್ಲಿ ಯಾವ ರೀತಿಯ ಪ್ರತ್ಯುತ್ತರ ನೀಡಬೇಕು ಎನ್ನುವ ನಿರ್ಧಾರವನ್ನು ಕೈಗೊಳ್ಳುವ ಸಾಮರ್ಥ್ಯ ನಮ್ಮ ನಾಯಕರಿಗಿದೆ ಎಂದು ಅಜಿತ್ ಧೋವಲ್ ಹೇಳಿದರು.
National Security Advisor Ajit Doval at the 80th CRPF Anniversary Parade in Gurugram: I want to pay tributes to the brave 40 CRPF jawans who sacrificed their lives in Pulwama for the country. The country hasn't forgotten it & it will never forget it. #Haryanapic.twitter.com/5s4nEXj5U4