ಅಸ್ಸಾಂ: ಟಿವಿ ವಾಹಿನಿಯ ಪತ್ರಕರ್ತನ ಮೇಲೆ ಚೂರಿ ಇರಿತ, ನಾಲ್ವರ ಬಂಧನ

ಅಸ್ಸಾಂ ನ ಗುವಾಹಟಿ ಗಣೇಶ ಗುಡಿ ಪ್ರದೇಶದಲ್ಲಿ ಟಿವಿ ವಾಹಿನಿಯೊಂದರ ಪತ್ರಕರ್ತನ ಮೇಲೆ ಚೂರಿ ಇರಿದು ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗುವಾಹಟಿ: ಅಸ್ಸಾಂ ನ ಗುವಾಹಟಿ ಗಣೇಶ ಗುಡಿ ಪ್ರದೇಶದಲ್ಲಿ ಟಿವಿ ವಾಹಿನಿಯೊಂದರ ಪತ್ರಕರ್ತನ ಮೇಲೆ ಚೂರಿ ಇರಿದು ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.
ನ್ಯೂಸ್‌ 18 ಸುದ್ದಿ ವಾಹಿನಿಯ ಪತ್ರಕರ್ತ ಚಕ್ರಪಾಣಿ ಪರಾಶರ ಅವರ ಮೇಲೆ ಹೋಟೆಲ್ ನಲ್ಲಿ ,ಆರಣಾಂತಿಕ ಹಲ್ಲೆ ನಡೆದಿದೆ. ಅವರು ಗುರುವಾರ ಕರ್ತವ್ಯದಲ್ಲಿದ್ದ ವೇಳೆಯಲ್ಲಿ ಹೋಟೆಲ್ ನ ಕೆಲ ಕಾರ್ಮಿಕರು ಚೂರಿಯಿಂಡ ಅವರ ಮೇಲೆ ಹಲ್ಲೆ ನ್ಮಾಡಿದ್ದಾರೆ.
ಘಟನೆ ಸಂಬಂಧ ಪೋಲೀಸರು ನಾಲ್ವರನ್ನು ವ್ಬಂಧಿಸಿದ್ದಾರೆ. ಟಿವಿ ಪತ್ರಕರ್ತ ಚಕ್ರಪಾಣಿ ಗಂಬೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ನ್ಯೂಸ್‌ 18 ಸುದ್ದಿ ಸಂಸ್ಥೆ ಹೇಳಿದೆ.
ವಿವಿಧ ರಾಜಕೀಯ ಪಕ್ಷಗಳು - ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಕರ್ತರ ಸಂಘಟನೆಗಳು ಟಿವಿ ವಾಹಿನಿ ಪತ್ರಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com