ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆತ, 'ಜೀವಂತವಾಗಿ ಬದುಕಿ ವಾಪಸ್ ಬರುತ್ತೇನೆ ಎಂದು ಭಾವಿಸಿರಲಿಲ್ಲ. ನನ್ನ ಮೇಲೆ ಒಂದು ಗೇಣು ಎತ್ತರದಲ್ಲಿ ಗೋಡೆ ಇತ್ತು. ಅದು ಕುಸಿದಿದ್ದರೆ ನಾನು ಸಾಯುತ್ತಿದ್ದೆ. ಅತ್ತಿತ್ತ ಸರಿದಾಡಲೂ ಜಾಗ ಇರಲಿಲ್ಲ. ನಾನು ಬದುಕಿ ಬರುವ ಆಸೆಯನ್ನೇ ಕಳೆದುಕೊಂಡಿದ್ದೆ. ನಮ್ಮ ಕಚೇರಿ ಪಕ್ಕದ ಅಂಗಡಿಯಲ್ಲಿ ಒಬ್ಬ ವೃದ್ಧರು ಇದ್ದರು ಅವರು 2 ದಿನ ಮಾತನಾಡುತ್ತಿದ್ದರು. ಆ ನಂತರ ಅವರ ಮಾತೂ ಕೇಳುತ್ತಿರಲಿಲ್ಲ. ಆ ನಂತರ ನಾನೊಬ್ಬನೇ ಆ ಸ್ಥಳದಲ್ಲಿ ಇದ್ದೆ ಎಂದು ತನ್ನ ಅನುಭವ ಹಂಚಿಕೊಂಡಿದ್ದಾನೆ.