ಹೈದರಾಬಾದ್: 2008ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಯಾವುದೇ ಪ್ರತೀಕಾರ ದಾಳಿ ನಡೆಸದಿರುವುದಕ್ಕೆ ಹಿಂದಿನ ಯುಪಿಎ ಸರ್ಕಾರ ತೆಗೆದುಕೊಳ್ಳದೇ ಇದ್ದ ದಿಟ್ಟ ನಿರ್ಧಾರವೇ ಕಾರಣ. ಕಳೆದ ತಿಂಗಳು ಬಾಲಾಕೋಟ್ ನಲ್ಲಿ ನಡೆಸಿದ ವಾಯುದಾಳಿಯಂತಹ ದಾಳಿಯನ್ನು 26/11ರ ಭಯೋತ್ಪಾದಕ ದಾಳಿ ನಂತರ ನಡೆಸಬಹುದಾಗಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.