ಭಾರತಕ್ಕೆ ನುಗ್ಗಿದ್ದ ಪಾಕಿಸ್ತಾನ ಯುದ್ಧ ವಿಮಾನವನ್ನು ಬೆನ್ನಟ್ಟಿ ಹೋಗಿ ಹೊಡೆದಿದ್ದ ಅಭಿನಂದನ್ ಪಾಕ್ ಸೇನೆಗೆ ಸಿಕ್ಕು ಎರಡೂವರೆ ದಿನಗಳ ನಂತರ ಭಾರತಕ್ಕೆ ಸುರಕ್ಷಿತವಾಗಿ ಹಿಂತಿರುಗಿದ್ದರು. ಭಾರತಕ್ಕೆ ಮರಳಿದ್ದ ಅಭಿನಂದನ್ ವಾಯುಪಡೆಯಿಂದ ವಿಚಾರಣೆಗೆ ಒಳಗಾಗಿದ್ದು ಅವರ ವಿಚಾರಣೆ ನಂತರ ನಾಲ್ಕು ವಾರಗಳ ಕಾಲ ಅನಾರೋಗ್ಯದ ರಜೆ ಮೇಲೆ ತೆರಳುವಂತೆ ಹೇಳಲಾಗಿತ್ತು.